2017 ಕಾರ್ಯಕ್ರಮಗಳು

ಸೆಪ್ಟೆಂಬರ್ ೨ ೨೦೧೭:
ಸಿರಿಧಾನ್ಯಗಳ ಪರಿಚಯ ಕಾರ್ಯಕ್ರಮ

ಸೆಪ್ಟೆಂಬರ್ ೨, ೨೦೧೭ ರಂದು ಪುನರ್ಚಿತ್ ಕಲಿಕಾ ಕೇಂದ್ರಲ್ಲಿ ಒಂದು ದಿನದ ಸಿರಿಧಾನ್ಯ ಪರಿಚಯ ಕಾರ್ಯಕ್ರಮವನ್ನು ಆಯೋಜಿಲಾಗಿತ್ತು. ಇದರ ಭಾಗವಾಗಿ ಪುನರ್ಚಿತ್ ಕಲಿಕಾ ಕೇಂದ್ರದ ಒಂದು ಸಣ್ಣ ಜಾಗದಲ್ಲಿ ಬೆಳೆದಿರುವ ಸಿರಿಧಾನ್ಯಗಳು ಬರಗಾಲವನ್ನು ಎದುರಿಸಿ ಹೇಗೆ ಉಳಿದುಕೊಂಡಿವೆ ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ಪರಿಚಯ ಮಾಡಿಕೊಡಲಾಯಿತು. ಪುನರ್ಚಿತ್‌ನ ಸಲಹಾಗಾರರು ಮತ್ತು ಸಿರಿಧಾನ್ಯಗಳ ಸಂಪನ್ಮೂಲ ವ್ಯಕ್ತಿಯಾದ ದ್ವಿಜೇಂದ್ರನಾಥ್ ಗುರು ಅವರು ಕಾರ್ಯಕ್ರಮಕ್ಕೆ ಭೇಟಿ ಮಾಡುವ ಬೇರೆ ಬೇರೆ ಗುಂಪುಗಳಿಗೆ ಪ್ರಾತ್ಯಕ್ಷಿಕೆ ಮೂಲಕ ಸಿರಿಧಾನಗಳ ಮಹತ್ವದ ಬಗ್ಗೆ ತಿಳಿಸಿಕೊಟ್ಟರು. ನಂತರ ಸಿರಿಧಾನ್ಯಗಳ ಬಗ್ಗೆ ಸಣ್ಣದೊಂದು ಚರ್ಚೆಯನ್ನು ಸಂಪನ್ಮೂಲ ವ್ಯಕ್ತಿ ಜನಾರ್ಧನ ಕೆಸರಗದ್ದೆ ಅವರು ನಡೆಸಿಕೊಟ್ಟರು. ಸಿರಿಧಾನ್ಯಗಳ ಹಾಡನ್ನು ಜನಾರ್ಧನ ಕೆಸರಗದ್ದೆ ಅವರು ರಚಿಸಿದ್ದು, ಈ ಹಾಡನ್ನು ಹೊನ್ನೇರು ಗ್ರಾಮೀಣ ಯುವಜನ ಒಕ್ಕೂಟದ ಸದಸ್ಯೆ ಮಹಾದೇವಿ ಹಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಸಿರಿಧಾನ್ಯಗಳಿಂದ ತಯಾರಿಸಿದ ಫಲಾವ್, ಮಿಶ್ರ ಸಿರಿಧಾನ್ಯಗಳ ಪಾಯಸವನ್ನು ಉಣ ಬಡಿಸಲಾಯಿತು.


ಆಗಸ್ಟ್ ೩೦, ೨೦೧೭ ರಂದು :
ಬೀಳ್ಕೊಡಿಗೆ ಮತ್ತು ಪ್ರಮಾಣ ಪತ್ರ ವಿತರಣಾ ಕಾರ್ಯಾಕ್ರಮ, ದೊಡ್ಡಮೋಳೆ ಗ್ರಾಮ

ಸಮಗ್ರ ಕಲಿಕಾ ತರಬೇತಿಯ ೫ನೇ ತಂಡದ ಬೀಳ್ಕೊಡಿಗೆ ಕಾರ್ಯಕ್ರಮವನ್ನು ದೊಡ್ಡಮೋಳೆ ಗ್ರಾಮದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕಲಿಕಾರ್ಥಿಗಳು ತಮ್ಮ ಹಳ್ಳಿಯ ವಾಸ್ತವ ಅನ್ಯಾಯದ ಘಟನೆಯ ಬಗ್ಗೆ ನ್ಯಾಯ ಬೆಲೆ ಅಥವಾ ರೇಷನ್ ಅಂಗಡಿ ನಾಟಕವನ್ನು ಚೆನ್ನಾಗಿ ಅಭಿನಯಿಸಿದ್ದು, ಈ ನಾಟಕವನ್ನು ಬರ್ಟಿ ಒಲಿವೆರಾ ಅವರು ನಿರ್ದೇಶನ ಮಾಡಿದರು. ಈ ಕಾರ್ಯಕ್ರಮದಲ್ಲಿ ಸಮಗ್ರ ಕಲಿಕಾ ತರಬೇತಿಯ ಹೊನ್ನೇರು ಗ್ರಾಮೀಣ ಯುವಜನ ತಂದಡ ಸದಸ್ಯರು, ದೊಡ್ಡ ಪ್ರಮಾಣದಲ್ಲಿ ಗ್ರಾಮದವರು ಭಾಗವಹಿಸಿ ಕಾರ್ಯಾಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಲಿಕಾರ್ಥಿಗಳು ಸಮಗ್ರ ಕಲಿಕಾ ತರಬೇತಿಯಲ್ಲಿ ತಾವು ಏನು ಕಲಿತಿದ್ದೇವೆ ಎಂಬುದನ್ನು ಹಂಚಿಕೊಂಡರು. ತಮ್ಮ ಗ್ರಾಮದ ಅಧ್ಯಯನ ವರದಿಗಳ ಮುಖ್ಯ ಅಂಶಗಳ ಭಿತ್ತಿಪತ್ರ ಪ್ರದರ್ಶನವನ್ನು ಮಾಡಿದರು.


ಜುಲೈ ೨೯, ರಂದು ಮಣ್ಣು-ಕಣ್ಣು ಛಾಯಚಿತ್ರಗಳ ಸೈಡ್ ಷೋ ಕಾರ್ಯಕ್ರಮ.


ಜೂನ್ ೨೨ : ರಂದು ಶಿರಸಿ ಮಲೆನಾಡುಮೇಳ


ಜೂನ್ ೧೮: ರಂದು ಅಂಗರಿಕೆ ಮಾಳದ ಕಾರ್ಯಕ್ರಮ


ಮೇ ೧೫ ರಿಂದ ೩೦: ರವರೆಗೆ ಭೂಮಿ ಪ್ರಾಯೋಜಕ ನೆರವು ಕಾರ್ಯಕ್ರಮ ಆರಂಭ ಮತ್ತು ಭೂಮಿ ಉಳುಮೆ ಮತ್ತು ಬಿತ್ತನೆ ಪೂರ್ಣಗೊಂಡಿದೆ.


ಏಪ್ರಿಲ್ ೨೦: ರಂದು ಸಮಗ್ರ ಕಲಿಕಾ ತರಬೇತಿಯ ೫ನೇ ತಂಡದ ಉದ್ಘಾಟನೆ


2022 ಕಾರ್ಯಕ್ರಮಗಳು

2020 ಕಾರ್ಯಕ್ರಮಗಳು

2019 ಕಾರ್ಯಕ್ರಮಗಳು
2018 ಕಾರ್ಯಕ್ರಮಗಳು